ಪ್ರಚಲಿತ ವಿದ್ಯಮಾನಗಳು-ಜೂನ್,30,2017

ರಾಷ್ಟ್ರೀಯ ಶಿಕ್ಷಣ ನೀತಿ: ಕಸ್ತೂರಿ ರಂಗನ್ ಸಮಿತಿ ರಚನೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ನು ರೂಪಿಸಲು ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಹೊಸ ಒಂಬತ್ತು-ಸದಸ್ಯರ ಸಮಿತಿಯನ್ನು ಮಾನವ ಸಂಪನ್ಮೂಲ ಸಚಿವಾಲಯ ರಚಿಸಿದೆ. ಸಮಿತಿಯ ಇತರ ಸದಸ್ಯರು ವ್ಯಾಪಕ ಹಿನ್ನೆಲೆಗಳಿಂದ ಆಯ್ದ ತಜ್ಞರು ಮತ್ತು ಶಿಕ್ಷಣ ತಜ್ಞರಾಗಿರಲ್ಲಿದ್ದಾರೆ.             ಕೇರಳದ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಶೇ.100% ಸಾಕ್ಷರತೆಯನ್ನು ಸಾಧಿಸಲು ಅಪಾರ ಶ್ರಮವಹಿಸಿದ್ದ  ಮಾಜಿ ಐಎಎಸ್ ಅಧಿಕಾರಿ ಕೆ.ಜೆ ಅಲ್ಪೊನ್ಸೊ ಕಣಮಥನಂ ಅವರು ಈ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,29,2017

ಇಂಧನ ಸಂರಕ್ಷಣೆ ಕಟ್ಟಡ ನೀತಿ-2017ಗೆ ಚಾಲನೆ ಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗಣಿ ಸಚಿವಾಲಯ ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಪ್ರಾರಂಭಿಸಿದೆ. ಕೋಡ್ನ ಈ ನವೀಕರಿಸಿದ ಆವೃತ್ತಿಯಡಿ ಭಾರತದಾದ್ಯಂತ ಹೊಸ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಇಂಧನ ನಿರ್ವಹಣಾ ಮಾನದಂಡಗಳನ್ನು ಸೂಚಿಸಲಾಗಿದೆ. ಪ್ರಮುಖಾಂಶಗಳು: ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಇಂಧನ ಸಚಿವಾಲಯ ಮತ್ತು ಎನರ್ಜಿ ಎಫಿಷಿಯೆನ್ಸಿಯ ಬ್ಯೂರೋ (ಬಿಇಇ) ಅಮೆರಿಕಾದ ಯುನೈಟೆಡ್ ಸ್ಟೇಟ್ಸ್…

Read More

ಪ್ರಚಲಿತ ವಿದ್ಯಮಾನಗಳು-ಜೂನ್,28,2017

ಇಸ್ರೋದ ಮಂಗಳ ಯಾನಕ್ಕೆ  1000 ದಿನದ ಸಂಭ್ರಮ ಇಸ್ರೋದ “ಮಾರ್ಸ್ ಆರ್ಬಿಟರ್ ಮಿಷನ್ (MOM)” 1000 ಭೂಮಿಯ ದಿನಗಳನ್ನು ಕಕ್ಷೆಯಲ್ಲಿ ಪೂರ್ಣಗೊಳಿಸಿದೆ. ತನ್ನ ನಿಗದಿತ ಜೀವಿತಾವಧಿಗಿಂತ 5 ಪಟ್ಟು ಹೆಚ್ಚು ಕಾಲ ಕಕ್ಷೆಯಲ್ಲಿ ಇರುವ ಮೂಲಕ ಮಂಗಳಯಾನ ಇತಿಹಾಸ ಸೃಷ್ಟಿಸಿದೆ. MOM ಪ್ರಸ್ತುತ 388 ಭಾರಿ ಮಂಗಳದ  ಕಕ್ಷೆಯನ್ನು ಪರಿಭ್ರಮಿಸಿದೆ ಮತ್ತು 715 ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ವಿಜ್ಞಾನಿಗಳ ಪ್ರಕಾರ, MOM ಉತ್ತಮ ಕಾರ್ಯನಿರ್ವಹಣೆ ಸ್ಥಿತಿಯಲ್ಲಿದ್ದು ನಿಧಾನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತವು ಮಂಗಳಯಾನ 2.0 ಮತ್ತು…

Read More

ಪ್ರಚಲಿತ ವಿದ್ಯಮಾನಗಳು-ಜೂನ್,27,2017

ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೊಚ್ಚಿ ಮೆಟ್ರೋ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ಮೆಟ್ರೊ ಲೈನ್ ಆಗಿರುವ  ಕೊಚ್ಚಿ ಮೆಟ್ರೊ ಲೈನ್ ಅನ್ನು ಉದ್ಘಾಟಿಸಿದ್ದಾರೆ. DMRC ಈ ಯೋಜನೆಯನ್ನು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದಿದೆ. ಪ್ರಧಾನ ಮಂತ್ರಿ ರವರು  ಮೆಟ್ರೋದ 25 ಕಿಮೀ ಉದ್ದದ ಪೈಕಿ ಮೊದಲ ಹಂತವಾದ 13.2 ಕಿ.ಮೀ.ಯನ್ನು ಉದ್ಘಾಟಿಸಿದರು. ಕೊಚ್ಚಿ ಮೆಟ್ರೊ ದೇಶದ ಎಂಟನೆಯ ಅಂತರ ನಗರ ಮೆಟ್ರೋ ರೈಲು ಯೋಜನೆಯಾಗಿದೆ. ಕೊಚ್ಚಿ ಮೆಟ್ರೋ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,26,2017

ಜಾಗತಿಕ ಆವಿಷ್ಕಾರ ಸೂಚ್ಯಂಕ: ಭಾರತಕ್ಕೆ 60ನೇ ಸ್ಥಾನ ಜಾಗತಿಕ ಆವಿಷ್ಕಾರ ಸೂಚ್ಯಂಕ (Global Innovation Index) 2017ರಲ್ಲಿ ಭಾರತ 130 ರಾಷ್ಟ್ರಗಳ ಪೈಕಿ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಆ ಮೂಲಕ ಕಳೆದ ಸಾಲಿಗಿಂತ 6 ಸ್ಥಾನ ಏರಿಕೆ ಕಂಡಿದೆ.  ಕಾರ್ನೆಲ್ ಯೂನಿವರ್ಸಿಟಿ, INSEAD ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಸಂಸ್ಥೆಗಳ ಸಹಭಾಗಿತ್ವದಲ್ಲಿ 2017 ಜಾಗತಿಕ ಆವಿಷ್ಕಾರ ಸೂಚ್ಯಂಕ ಪ್ರಕಟಗೊಂಡಿದೆ.  ಇದು 10ನೇ ಆವೃತ್ತಿಯಾಗಿದೆ. ಟಾಪ್ 10 ರಾಷ್ಟ್ರಗಳು: ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ನೆದರ್ಲೆಂಡ್ಸ್, ಯುಎಸ್, ಯುಕೆ,…

Read More

ಪ್ರಚಲಿತ ವಿದ್ಯಮಾನಗಳು-ಜೂನ್,25,2017

ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ ಎನ್ ಭಗವತಿ ಇನ್ನಿಲ್ಲ ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಫುಲಚಂದ್ರ ನ್ಯಾತ್ವರ್ಲಾಲ್ ಭಗವತಿ ನಿಧನರಾದರು. ಭಗವತಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ನ್ಯಾಯಮೂರ್ತಿ ಭಗವತಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪರಿಕಲ್ಪನೆಗಳನ್ನು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸಂಪೂರ್ಣ ಹೊಣೆಗಾರಿಕೆಯನ್ನು ಪರಿಚಯಿಸಿದ ಮೊದಲಿಗರು. ಯಾವ ವ್ಯಕ್ತಿಯ ಹಕ್ಕಿಗೆ ಚ್ಯುತಿ ಆಗಿದೆಯೊ ಆತನೇ ಕೋರ್ಟ್‌ ಮೆಟ್ಟಿಲು ತುಳಿಯಬೇಕು ಎಂಬ ಆಂಗ್ಲೊ ಸ್ಯಾಕ್ಸ್‌ ನ್ಯಾಯಶಾಸ್ತ್ರ ಪದ್ಧತಿಗೆ ಬದಲಾವಣೆ ತಂದವರು ಇವರು. 1978ರಲ್ಲಿ ಮೇನಕಾ ಗಾಂಧಿ ಪ್ರಕರಣದಲ್ಲಿ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,24,2017

ವಿಶ್ವಸಂಸ್ಥೆಯ ನ್ಯಾಯಸಂಸ್ಥೆಗೆ (ILTO) ಭಾರತದ ನೀರೂ ಛಡ್ಡಾ ಆಯ್ಕೆ ಸಾಗರ ಸಂಬಂಧಿ ವಿವಾದಗಳ ವಿಚಾರಣೆ ನಡೆಸುವ  ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ಕಾನೂನಿನ ತಜ್ಞೆ ನೀರೂ ಛಡ್ಡಾ ಅವರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯೊಂದಿಗೆ, ಸಮುದ್ರದ ಕಾನೂನು ವಿವಾದಗಳಿಗೆ ಸಂಬಂಧಿಸಿದ ಉನ್ನತ ನ್ಯಾಯಾಲದ ನಿರ್ಣಾಯಕ ಚುನಾವಣೆ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ ಹಾಗೂ ಈ ನ್ಯಾಯಮಂಡಳಿಗೆ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಭಾರತೀಯ ಮಹಿಳೆ ನೀರೂ ಪಾತ್ರರಾಗಿದ್ದಾರೆ             ಐಟಿಎಲ್ಒಎಸ್ 21 ಸ್ವತಂತ್ರ ಸದಸ್ಯರನ್ನು ಒಳಗೊಂಡಿದೆ. ಸಮುದ್ರ ಕಾನೂನಿನ ಕ್ಷೇತ್ರದಲ್ಲಿ ಅಗತ್ಯವಾದ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,23,2017

ರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೇಲೆ ಬಡ್ಡಿ ಕೊಡುಗೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ 2017-18ರಲ್ಲಿ ರೈತರಿಗೆ ಬಡ್ಡಿ ದರ ಕೊಡುಗೆ ಯೋಜನೆಯನ್ನು (ಐಎಸ್ಎಸ್) ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ. ಸರ್ಕಾರವು ಈ ಯೋಜನೆಗೆ 20,339 ಕೋಟಿ ರೂ ಮೀಸಲಿಟ್ಟಿದೆ. ಪ್ರಮುಖಾಂಶಗಳು: ಅಲ್ಪಾವಧಿಯ ಬೆಳೆ ಸಾಲಕ್ಕೆ ಲಭ್ಯವಿರುವ ಕೃಷಿ ಸಾಲವನ್ನು ಕೈಗೆಟುಕುವ ದರದಲ್ಲಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ದೇಶದಲ್ಲಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,22,2017

ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ನಂ.1 ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 862 ರೇಟಿಂಗ್ ಪಾಯಿಂಟ್‌ ಗಳೊಂದಿಗೆ ವಿರಾಟ್‌ ಕೊಹ್ಲಿ ಏಕದಿನ ಬ್ಯಾಟ್ಸ್ ಮನ್‌ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಿದ್ದಾರೆ. ಇತರ ಆಟಗಾರರ ಪೈಕಿ ಶಿಖರ್ ಧವನ್ ಅವರು ಟಾಪ್ 10 ಸ್ಥಾನಕ್ಕೆ…

Read More