ಪ್ರಚಲಿತ ವಿದ್ಯಮಾನಗಳು-ಮಾರ್ಚ್,27,2017

ನ್ಯೂಟ್ರಿನೋ ಪ್ರಾಜೆಕ್ಟ್ ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ತಡೆ ಭಾರತ ಮೂಲದ ನ್ಯೂಟ್ರಿನೋ ಪ್ರಾಜೆಕ್ಟ್ ಗೆ ಪರಿಸರ ಅನುಮೋದನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ತಡೆ ನೀಡಿದೆ. ಅಲ್ಲದೇ ಪ್ರತಿವಾದಿಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಉದ್ದೇಶಿತ ನ್ಯೂಟ್ರಿನೋ ಪ್ರಾಜೆಕ್ಟ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಮಥಿಕೆತ್ತನ್ ಶೋಲಾ ರಾಷ್ಟ್ರೀಯ ಉದ್ಯಾನವನದಿಂದ 4.5 ಕಿ.ಮೀ ದೂರದಲ್ಲಿ ಹಾಗೂ ಕೇರಳ-ತಮಿಳುನಾಡು ಗಡಿ ಭಾಗದಿಂದ ಒಂದು ಕಿ.ಮೀ ದೂರದಲ್ಲಿದ್ದು, ಈ ಭಾಗ ಎನ್ವಿರಾಲ್ಮೆಂಟಲ್ ಇಂಪಾಕ್ಟ್ ಅಸಸ್ಮೆಂಟ್ ನಲ್ಲಿ ಕೆಟಗರಿ “ಎ”…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,25,26,2017

ವೊಡಾಫೋನ್, ಐಡಿಯಾ ದೂರವಾಣಿ ಸಂಸ್ಥೆಗಳ ವಿಲೀನ ಕುಮಾರ ಮಂಗಳಂ ಬಿರ್ಲಾ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ಐಡಿಯಾ ಸೆಲುಲಾರ್ ಯುಕೆ ಮೂಲದ ವೊಡಾಫೋನ್‌ ಸಮೂಹದ ವೊಡಾಫೋನ್‌ ಇಂಡಿಯಾದೊಂದಿಗೆ ವಿಲೀನಗೊಳ್ಳಲು ಸಮ್ಮತಿಸಿದೆ.  ಈ ವಿಲೀನ ಪ್ರಕ್ರಿಯೆ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಸಂಸ್ಥೆಯನ್ನು ಹಾಗೂ ವಿಶ್ವದ ಎರಡನೇ ಅತಿ ದೊಡ್ಡ ಸಂಸ್ಥೆಯನ್ನು ಹುಟ್ಟುಹಾಕಲಿದೆ. ಪ್ರಮುಖಾಂಶಗಳು: ವೊಡಾಫೋನ್‌–ಐಡಿಯಾ ವಿಲೀನದ ಮೂಲಕ 40 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್‌ ದೂರಸಂಪರ್ಕ ಸಂಸ್ಥೆಯಾಗಲಿದೆ. ಆ ಮೂಲಕ ಶೇ 35% ರಷ್ಟು ಗ್ರಾಹಕರ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,24,2017

ಬಂಗಾಳದಲ್ಲಿ 1.04 ಕೋಟಿ ಜನರು ಆರ್ಸನೆಕ್ ಕಲುಷಿತಕ್ಕೆ ತುತ್ತು: ವರದಿ ಪಶ್ಚಿಮ ಬಂಗಾಳದಲ್ಲಿ ದೇಶದಲ್ಲೆ ಅತಿ ಹೆಚ್ಚು ಜನರು ಆರ್ಸನಿಕ್ ಕಲುಷಿತದಿಂದ ಭಾದಿತರಿರುವುದಾಗಿ ಲೋಕಸಭೆಯಲ್ಲಿ ಮಂಡಿಸಿದ ವರದಿಯೊಂದರಲ್ಲಿ ಹೇಳಲಾಗಿದೆ. ಪಶ್ಚಿಮ ಬಂಗಾಳದ ಎಂಟು ಜಿಲ್ಲೆಗಳ 83 ತಾಲ್ಲೂಕಿನ ಅಂತರ್ಜಲ ಆರ್ಸನೆಕ್ ರಾಸಾಯನಿಕ ಅಂಶದಿಂದ ಕಲುಷಿತಗೊಂಡಿದೆ ಎನ್ನಲಾಗಿದೆ. ಆರ್ಸೆನಿಕ್ ಗಂಭೀರತೆಯನ್ನು ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಆದರೂ ಇನ್ನೂ ಸಾಕಷ್ಟು ಮಾಡಬೇಕಿದೆ. ಇಲ್ಲಿಯವರೆಗೆ ಶೇ 52% ಆರ್ಸೆನಿಕ್ ಭಾದಿತ ಪ್ರದೇಶಗಳಿಗೆ ಮಾತ್ರ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,23,2017

ಕರ್ನಾಟಕ ಬಜೆಟ್ 2017-18: ಒಂದು ನೋಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ರಾಜ್ಯ ಆಯವ್ಯಯವನ್ನು ಮಂಡಿಸಿದರು. ಇದು ಸಿದ್ದರಾಮಯ್ಯ ಅವರು ಮಂಡಿಸಿದ ಒಂಬತ್ತನೇ ಆಯವ್ಯಯ ಆಗಿದೆ. ಬಜೆಟ್ ನ ಪ್ರಮುಖಾಂಶಗಳು ಇಂತಿವೆ. ಆಯವ್ಯಯ ಗಾತ್ರ (ಸಂಚಿತ ನಿಧಿ)-1,86,561 ಕೋಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14.16 ರಷ್ಟು ಹೆಚ್ಚಳ. ಒಟ್ಟು ಸ್ವೀಕೃತಿ: 1,82,119 ಕೋಟಿ ರೂ, ರಾಜಸ್ವ ಸ್ವೀಕೃತಿ 1,44,892 ಕೋಟಿ ಮತ್ತು 37,092 ಕೋಟಿ ರೂ ಸಾಲ ಮತ್ತು 135 ಕೋಟಿ ರೂ ಬಂಡವಾಳ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,22,2017

ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಕರಡು ಕಾರ್ಮಿಕ ನೀತಿ ಸ್ವ ಉದ್ಯೋಗಿಗಳು, ಕೃಷಿ ಕಾರ್ಮಿಕರು ಸೇರಿದಂತೆ ದೇಶವ್ಯಾಪ್ತಿ ಇರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಕೇಂದ್ರ ಕಾರ್ಮಿಕ ಸಚಿವಾಲಯ ಕರಡು ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದೆ. ದೇಶದ ಸುಮಾರು 45 ಕೋಟಿ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಪ್ರಮುಖಾಂಶಗಳು: ಸಂಘಟಿತ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೂ ಈ ನೀತಿ ಅನ್ವಯವಾಗಲಿದೆ. ಆ ಮೂಲಕ ಇದೆ ಮೊದಲ ಬಾರಿಗೆ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,21,2017

ಮಣಿಪುರ, ಗೋವಾ, ಉತ್ತರಖಂಡ್, ಉತ್ತರ ಪ್ರದೇಶ ಮತ್ತು ಪಂಜಾಬ್ ಗೆ ನೂತನ ಮುಖ್ಯಮಂತ್ರಿಗಳು ಮಣಿಪುರ ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.  ಇಂಫಾಲದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೇನ್ ಅವರೊಂದಿಗೆ ಇತರ ಇಬ್ಬರ ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜೋಯ್ ಕುಮಾರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಜೋಯ್ ಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮಣಿಪುರ ರಾಜ್ಯಪಾಲ ನಜ್ಮಾ ಹೆಫ್ತುಲ್ಲಾ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,19,20,2017

ಮಹಿಳಾ ಸಂಸದರ ಪ್ರಮಾಣ: ಭಾರತಕ್ಕೆ 148ನೇ ಸ್ಥಾನ ಇತ್ತೀಚೆಗೆ ಬಿಡುಗಡೆಗೊಂಡ 2017 ರಾಜಕೀಯದಲ್ಲಿ ಮಹಿಳೆಯರು ವರದಿಯಲ್ಲಿ ವಿಶ್ವದಲ್ಲಿ ಮಹಿಳಾ ಸಂಸದರ ಸಂಖ್ಯೆಯಲ್ಲಿ ಭಾರತ 148ನೇ ಸ್ಥಾನ ಹೊಂದಿದೆ. ವಿಶ್ವಸಂಸ್ಥೆ ವುವೆನ್ ಹಾಗೂ ಇಂಟರ್-ಪಾರ್ಲಿಯಮೆಂಟರಿ ಯೂನಿಯನ್ ಈ ವರದಿಯನ್ನು ಬಿಡುಗಡೆಗೊಳಿಸಿದೆ. ವರದಿಯ ಪ್ರಮುಖಾಂಶಗಳು: 2015 ರಿಂದ ಜಾಗತಿಕವಾಗಿ ಸಂಸತ್ತು ಹಾಗೂ ಕಾರ್ಯನಿರ್ವಾಹಕ ಸರ್ಕಾರದಲ್ಲಿ ಮಹಿಳೆಯರ ಪಾಲು ಸ್ಥಿರವಾಗಿದ್ದು, ಗಮನಾರ್ಹ ಬದಲಾವಣೆ ಆಗಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಟಾಪ್ ಹತ್ತು ರಾಷ್ಟ್ರಗಳು: ಹೆಚ್ಚು ಮಹಿಳಾ ಸಂಸದರನ್ನು ಒಳಗೊಂಡಿರುವ ಟಾಪ್ ಹತ್ತು ರಾಷ್ಟ್ರಗಳೆಂದರೆ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,17,18,2017

ಭಾರತ-ಬ್ರೆಜಿಲ್ ಸಾಮಾಜಿಕ ಭದ್ರತೆ ಒಪ್ಪಂದಕ್ಕೆ ಅನುಮೋದನೆ ಭಾರತ ಮತ್ತು ಬ್ರೆಜಿಲ್ ನಡುವಿನ ಸಾಮಾಜಿಕ ಭದ್ರತೆ ಒಪ್ಪಂದಕ್ಕೆ ಉಭಯ ದೇಶಗಳು ಅನುಮೋದನೆ ನೀಡಿವೆ. 2018ರ ಪ್ರಾರಂಭದಲ್ಲಿ ಈ ಒಪ್ಪಂದ ಜಾರಿಗೆ ಬರಲಿದೆ. ಬ್ರಿಕ್ಸ್ ರಾಷ್ಟ್ರವೊಂದರ ಜೊತೆ ಭಾರತ ಇಂತಹ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಇದೇ ಮೊದಲು. ಈ ಒಪ್ಪಂದ ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ಶೃಂಗಸಭೆಯ ಫಲವೆಂದು ಬಣ್ಣಿಸಲಾಗಿದೆ. ಒಪ್ಪಂದದ ಪ್ರಮುಖಾಂಶಗಳು: ತಮ್ಮ ದೇಶಗಳಿಂದ ಬೇರ್ಪಟ್ಟು ಎರಡು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕೊಡುಗೆಯಿಂದ ವಿನಾಯಿತಿ ನೀಡಲಾಗಿದೆ.…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,15,16,2017

ಇಂದ್ರಾಣಿ ದಾಸ್ ಗೆ ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಭಾರತೀಯ ಮೂಲದ ಅಮೆರಿಕದ ಬಾಲಕಿ ಇಂದ್ರಾಣಿ ದಾಸ್ ರವರು ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೆದುಳಿನ ಗಾಯಗಳು ಮತ್ತು ರೋಗಕ್ಕೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಪಟ್ಟ ಮಹತ್ವದ ಸಂಶೋಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಮಹತ್ತರ ಸಂಶೋಧನೆ ಎನಿಸಿದೆ. ಪ್ರಶಸ್ತಿ ಪಡೆದ ಇತರ ಭಾರತೀಯರು: ಭಾರತೀಯ ಮೂಲದ ಬಾಲಕ ಅರ್ಜುನ್ ರಮಣಿ ತೃತ್ತೀಯ…

Read More

ಪ್ರಚಲಿತ ವಿದ್ಯಮಾನಗಳು-ಮಾರ್ಚ್,13,14,2017

ನಾಸಾದ ಸಂಪರ್ಕಕ್ಕೆ ಲಭಿಸಿದ ಚಂದ್ರಯಾನ-1 ಏಳು ವರ್ಷಗಳ ಹಿಂದೆ ಭೂಮಿ ಜತೆಗಿನ ಸಂಪರ್ಕ ಕಳೆದುಕೊಂಡು “ಕಣ್ಮರೆ’ಯಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರ ಅಧ್ಯಯನ ನೌಕೆ “ಚಂದ್ರಯಾನ 1′ ಅನ್ನು ನಾಸಾದ  ಜೆಟ್‌ ಪ್ರಾಪಲÒನ್‌ ಲ್ಯಾಬೋರೇಟರಿ (ಜೆಪಿಎಲ್‌), ಪತ್ತೆಹಚ್ಚಿದೆ. ಚಂದ್ರಯಾನ-1 ನೌಕೆ ಚಂದ್ರನ ಮೇಲ್ಮೆ„ನಿಂದ ಸರಿಸುಮಾರು 200 ಕಿಲೋಮೀಟರ್‌ ದೂರದಲ್ಲಿ ಚಂದ್ರನ ಸುತ್ತುತ್ತಿರುವುದಾಗಿ ನಾಸಾ ವಿಜ್ಞಾನಿಗಳ ತಂಡ ಹೇಳಿದೆ. ಅಕ್ಟೋಬರ್ 22, 2008 ರಂದು ಚಂದ್ರಯಾನ ನೌಕೆಯನ್ನು ಉಡಾಯಿಸಿದ ಸರಿಯಾಗಿ ಒಂದು ವರ್ಷಗಳ ನಂತರ ಅಂದರೆ 2009ರ ಆ.29ರಂದು ಇಸ್ರೋ…

Read More