ಐದು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ನಿವಾರಣೆ, ತಪಾಸಣೆ ಮತ್ತು ನಿಯಂತ್ರಣ ಕಾರ್ಯಕ್ರಮ ಆರಂಭಿಸಲಿರುವ ಕೇಂದ್ರ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯ ಐದು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ನಿವಾರಣೆ, ತಪಾಸಣೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರಲಿದೆ. ವಿಶ್ವ ಕ್ಯಾನ್ಸರ್ ದಿನವಾದ ಫೆಬ್ರವರಿ 4 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಬಾಯಿ ಕುಳಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಈ ಐದು ರೋಗಗಳಾಗಿವೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಂಗವಾಗಿ…
Read Moreಹಿರಿಯ ಖಭೌತ ವಿಜ್ಞಾನಿ ಸಿ. ವಿ. ವಿಶ್ವೇಶ್ವರ ನಿಧನ ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನಿ, ಕನ್ನಡದ ಸಿ.ವಿ. ವಿಶ್ವೇಶ್ವರ (78) ಮರಣ ಹೊಂದಿದರು. ವಿಶ್ವೇಶ್ವರ ರವರು ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಚಾಲನೆ ನೀಡಿದವರಲ್ಲಿ ಒಬ್ಬರಾಗಿದ್ದರು. ವಿ.ವಿ. ವಿಶ್ವೇಶ್ವರ ಬಗ್ಗೆ: ವಿಶ್ವೇಶ್ವರ ಅವರು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅವರು, ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪೂರೈಸಿದ್ದರು. ಪಿಎಚ್.ಡಿ ಸಂಶೋಧನೆ…
Read Moreಐಎನ್ಎಸ್ ಖಾಂಡೇರಿ ಜಲಾಂತರ್ಗಾಮಿಗೆ ಚಾಲನೆ ಸ್ಕಾರ್ಪೀನ್ ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ಮಝಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್, ಮುಂಬೈ, ಮಹಾರಾಷ್ಟ್ರದಲ್ಲಿ ಉದ್ಘಾಟಿಸಲಾಯಿತು. ಸ್ಕಾರ್ಪೀನ್ ಸರಣಿಯ ಆರು ಜಲಾಂತರ್ಗಾಮಿಗಳ ಪೈಕಿ ಇದು ಎರಡನೇಯದಾಗಿದೆ. ಭಾರತೀಯ ನೌಕಪಡೆಯ “ಪ್ರಾಜೆಕ್ಟ್ 75”ರಡಿ ಮಝಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್ ಮತ್ತು ಫ್ರಾನ್ಸ್ ನ ಡಿಸಿಎನ್ಎಸ್ ಸಹಭಾಗಿತ್ವದಡಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಖಾಂಡೇರಿ ಜಲಾಂತರ್ಗಾಮಿ ಪ್ರಮುಖಾಂಶಗಳು: ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದ ‘ಖಾಂಡೇರಿ’ ಕೋಟೆಯ ಹೆಸರನ್ನೇ ಈ ಜಲಾಂತರ್ಗಾಮಿಗೆ ಇಡಲಾಗಿದೆ. ಸಮುದ್ರದ ನಡುವೆ…
Read Moreಸರ್ವ ಶಿಕ್ಷಣ ಅಭಿಯಾನದ ಪ್ರಗತಿ ಮೇಲೆ ನಿಗಾವಹಿಸಲು ಶಗುಣ್ ಪೋರ್ಟಲ್ ಆರಂಭ ಸರ್ವ ಶಿಕ್ಷಣ ಅಭಿಯಾನದ ಪ್ರಗತಿಯ ಮೇಲ್ವಿಚಾರಣೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಶಗುಣ್ ಪೋರ್ಟಲ್ (http://ssashagun.nic.in) ಅನ್ನು ಆರಂಭಿಸಿದೆ. ವಿಶ್ವಬ್ಯಾಂಕ್ ಈ ಪೋರ್ಟಲ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿದೆ. ಶಗುಣ್ ಹೆಸರು ಶಾಲಾ (ಶಾಲೆಗಳು) ಮತ್ತು ಗುಣ್ (ಗುಣ ಅಥವಾ ಕ್ವಾಲಿಟಿ) ನಿಂದ ಬಂದಿದೆ. ಪ್ರಮುಖಾಂಶಗಳು: ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳ ಮೇಲೆ ನಿಗಾವಹಿಸಲು ಹಾಗೂ ಈ ಶಾಲೆಗಳಲ್ಲಿ…
Read Moreಕೊರಗ ಮತ್ತು ಜೇನುಕುರುಬ ಜನಾಂಗದ ಮಕ್ಕಳಿಗೆ ಸ್ಟೈಫಂಡ್ ನೀಡಲಿರುವ ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮತ್ತು ಜೇನುಕುರುಬ ಜನಾಂಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಿಗೆ ಸ್ಟೈಪೆಂಡ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಬುಡಕಟ್ಟು ಜನಾಂಗದವರಿಗೆ ಪೌಷ್ಠಿಕ ಆಹಾರ ವಿತರಣೆ ಸೇರಿ ಇತರ ಯೋಜನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಸಮುದಾಯದವರಿಗೂ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದುಮೈಸೂರಿನಲ್ಲಿ ಫೆ.1ರಂದು ನಡೆಯಲಿರುವ ಆದಿವಾಸಿಗಳಿಗೆ ಸವಲತ್ತು ವಿತರಣೆ ಕುರಿತ…
Read Moreರಾಷ್ಟ್ರಕವಿ ಗೋವಿಂದ ಪೈ ಅವರ “ಗಿಳಿವಿಂಡು” ಸ್ಮಾರಕ ಭವನ ಲೋಕಾರ್ಪಣೆ ಕನ್ನಡದ ಮೊದಲ ರಾಷ್ಟ್ರಕವಿ ಮಹಾನ್ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ವನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸರಕಾರದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಲೋಕಾರ್ಪಣೆ ಮಾಡಿದರು. ರಾಷ್ಟ್ರಕವಿ ಗೋವಿಂದ ಪೈ ಅವರ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ದಲ್ಲಿ ಕರ್ನಾಟಕ,ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ,…
Read Moreಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್” ಅಧ್ಯಯನಕ್ಕೆ ಮಿಷನ್ ಆರಂಭಿಸಲಿರುವ ನಾಸಾ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್ (16 Psyche)” ಬಗ್ಗೆ ಅಧ್ಯಯನ ನಡೆಸಲು ಮಿಷನ್ ಆರಂಭಿಸಲಿದೆ. ಈ ಮಿಷನ್ ನ ಅಂಗವಾಗಿ ನಾಸಾ 2023ರ ವೇಳಗೆ ನೌಕೆಯೊಂದನ್ನು ಉಡಾಯಿಸಲಿದ್ದು, 2030ರ ವೇಳೆಗೆ ಸೈಕ್ ಕ್ಷುದ್ರಗ್ರಹವನ್ನು ಈ ನೌಕೆ ತಲುಪಲಿದೆ. ಈ ಕ್ಷುದ್ರಗ್ರಹದಲ್ಲಿರುವ ಖನಿಜ ಸಂಪತ್ತು ವಿಶ್ವದ ಆರ್ಥಿಕತೆ ಮೌಲ್ಯಗಿಂತ 100 ಸಾವಿರ ಪಟ್ಟು ಹೆಚ್ಚು ಎನ್ನಲಾಗಿದೆ.…
Read Moreಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸುಮಿತ್ ಭೋಸ್ ಸಮಿತಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಸಿದ್ದಪಡಿಸಲು ರಚಿಸಲಾಗಿದ್ದ ಸುಮಿತ್ ಭೋಸ್ ನೇತೃತ್ವದ ತಜ್ಞರ ಸಮಿತಿ ತನ್ನ ವರದಿಯನ್ನು ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯಕ್ಕೆ ಸಲ್ಲಿಸಿದೆ. ಸಮಿತ್ ಭೋಸ್ ರವರು ಮಾಜಿ ಹಣಕಾಸು ಕಾರ್ಯದರ್ಶಿ. ರಾಜ್ಯಗಳಿಗೆ ಸಂಪನ್ಮೂಲಗಳ ಹಂಚಿಕೆ ಮಾಡುವುದು ಹಾಗೂ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶವನ್ನು ಆಧರಿಸಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸಲು ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯ ಇನ್ನು ಮುಂದೆ ವಿವಿಧ…
Read Moreಭಾರತ ಮೂಲದ ನಾಲ್ಕು ವಿಜ್ಞಾನಿಗಳಿಗೆ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಬರಾಕ್ ಒಬಾಮ ರವರು ಭಾರತ ಮೂಲದ ನಾಲ್ಕು ವಿಜ್ಞಾನಿಗಳು ಸೇರಿದಂತೆ 102 ಸಂಶೋಧಕರನ್ನು ಪ್ರೆಸಿಡೆನ್ಷಿಯಲ್ ಅರ್ಲಿ ಕೆರಿಯರ್ ಆವಾರ್ಡ್ಸ್ ಫಾರ್ ಸೈನ್ಟಿಸ್ಟ್ ಅಂಡ್ ಇಂಜನಿಯರ್ಸ್ (Presidential Early Career Awards for Scientist and Engineers(PECASE)) ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವಿಜ್ಞಾನಿಗಳೆಂದರೆ ಪಂಕಜ್ ಲಾಲ್, ಕೌಶಿಕ್ ಚೌಧರಿ, ಮನೀಶ್ ಅರೊರ ಮತ್ತು ಅರಾದ್ನ ತ್ರಿಪಾಠಿ.…
Read Moreವಿಶ್ವದ ಅತಿದೊಡ್ಡ ಬೀದಿ ದೀಪ ಕಾರ್ಯಕ್ರಮಕ್ಕೆ ಕೇಂದ್ರ ಇಂಧನ ಸಚಿವಾಲಯದಿಂದ ಚಾಲನೆ ವಿಶ್ವದ ಅತಿದೊಡ್ಡ ಬೀದಿ ದೀಪ ಕಾರ್ಯಕ್ರಮಕ್ಕೆ ಕೇಂದ್ರ ಇಂಧನ ಸಚಿವಾಲಯ ಚಾಲನೆ ನೀಡಿದೆ. ದಕ್ಷಿಣ ಏಷ್ಯಾದ ಮುನಿಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು. ಎಲ್ಇಡಿ ಆಧರಿತ ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ಇದನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಇಂಧನ ಸಚಿವಾಲಯದಡಿ ಜಂಟಿ ನೇತೃತ್ವದಲ್ಲಿ ಎನರ್ಜಿ ಎಫಿಶಿಯೆನ್ಸಿ ಸರ್ವೀಸ್ ಲಿಮಿಟೆಡ್ (EESL) ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುತ್ತಿದೆ. ಪ್ರಮುಖಾಂಶಗಳು: ಬೀದಿ ದೀಪ ರಾಷ್ಟ್ರೀಯ ಕಾರ್ಯಕ್ರಮದಡಿ ದಕ್ಷಿಣ ದೆಹಲಿ…
Read More