ತೆರದ ಜಾಗದಲ್ಲಿ ತ್ಯಾಜ್ಯವನ್ನು ಸುಟ್ಟರೆ ರೂ 25,000 ದಂಡ: ರಾಷ್ಟ್ರೀಯ ಹಸಿರು ಮಂಡಳಿ ತೆರೆದ ಸ್ಥಳದಲ್ಲಿ ತ್ಯಾಜ್ಯ ಸುಡುವುದನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ಮಂಡಳಿ ಆದೇಶ ನೀಡಿದೆ. ಇದನ್ನು ಉಲ್ಲಂಘಿಸಿದರೆ ಗರಿಷ್ಠ 25 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದೆ. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ, ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ತೀರ್ಪಿನ ಪ್ರಮುಖಾಂಶಗಳು:…
Read Moreಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಪ್ರಸಿದ್ದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ ರವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷ ರಾಮಾನುಜನ ರವರ 129ನೇ ಜನ್ಮದಿನ. ಶ್ರೀನಿವಾಸ ರಾಮಾನುಜನ್: ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು 19987ರ ಡಿಸೆಂಬರ್ 22 ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದರು. ಕೇವಲ 32ನೇ ವರ್ಷದಲ್ಲಿ ಅಂದರೆ 26ನೇ ಏಪ್ರಿಲ್,…
Read Moreಬಂಗಾಳ ಕೊಲ್ಲಿಯಲ್ಲಿ ದೊಡ್ಡ “ಸತ್ತ ವಲಯ (ಡೆಡ್ ಝೋನ್) ಪತ್ತೆ ಭಾರತ ವಿಜ್ಞಾನಿಗಳನ್ನು ಒಳಗೊಂಡ ವಿಜ್ಞಾನಿಗಳ ತಂಡ ಬಂಗಾಳ ಕೊಲ್ಲಿಯಲ್ಲಿ ಸುಮಾರು 60,000 ಚದರ ಕಿಲೋ ಮೀಟರ್ ವ್ಯಾಪ್ತಿಯ ದೊಡ್ಡ “ಸತ್ತ ವಲಯ (Dead Zone)”ವನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶದವು ಅಪಾರ ಪ್ರಮಾಣದ ಸಾರಜನಕವನ್ನು ಸಾಗರದಿಂದ ಹೊರತೆಗೆಯುವ ಸೂಕ್ಷಜೀವಿಗಳ ಪ್ರಕ್ರಿಯೆಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ. ನೇಚರ್ ಜಿಯೋಸೈನ್ಸ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಡೆಡ್ ಝೋನ್ ಎಂದರೇನು? ಡೆಡ್ ಝೋನ್ ಎಂದರೆ ನೀರಿನ ತಳದಲ್ಲಿ ಕಡಿಮೆ ಅಥವಾ…
Read Moreಗ್ರೇಟರ್ ಮೆಕಾಂಗ್ ವಲಯದಲ್ಲಿ 163 ಹೊಸ ಪ್ರಭೇದಗಳು ಪತ್ತೆ ಆಗ್ನೇಯ ಏಷ್ಯಾದ ಪರಿಸರ ವೈವಿಧ್ಯತೆ ಪ್ರದೇಶವಾದ ಗ್ರೇಟರ್ ಮೆಕಾಂಗ್ ಪ್ರದೇಶದಲ್ಲಿ 163 ಹೊಸ ಪ್ರಬೇಧಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹೊಸ ಪ್ರಭೇದಗಳಲ್ಲಿ 3 ಸಸ್ತನಿಗಳು, 9 ಉಭಯಚರಗಳು, 11 ಮೀನುಗಳು, 14 ಸರೀಸೃಪಗಳು ಹಾಗೂ 143 ಸಸ್ಯಗಳನ್ನು ಪತ್ತೆಹಚ್ಚಲಾಗಿದೆ. ಕಾಂಬೋಡಿಯಾ, ಮಲೇಷಿಯಾ, ಲಾವೊಸ್, ವಿಯೆಟ್ನಾಂ ಮತ್ತು ಥಾಯ್ಲೆಂಡ್ ನಲ್ಲಿ ಈ ಪ್ರಭೇದಗಳು ಪತ್ತೆಯಾಗಿವೆ. ವಿಶ್ವ ವನ್ಯಜೀನಿ ಫಂಡ್ ವರದಿಯಲ್ಲಿ ಹೊಸ ಪ್ರಭೇದಗಳ ಅನ್ವೇಷಣೆ ಬಗ್ಗೆ ಪ್ರಕಟಿಸಲಾಗಿದೆ. ಪ್ರಮುಖಾಂಶಗಳು:…
Read Moreಗುಪ್ತದಳದ ನೂತನ ನಿರ್ದೇಶಕರಾಗಿ ರಾಜೀವ್ ಜೈನ್ ನೇಮಕ ಹಿರಿಯ ಐಪಿಎಸ್ ಅಧಿಕಾರಿಯಾದ ರಾಜೀವ್ ಜೈನ್ ಅವರನ್ನು ಗುಪ್ತದಳದ (Intelligence Bureau)ದ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಗುಪ್ತದಳದ ನಿರ್ದೇಶಕರಾಗಿರುವ ದಿನೇಶ್ವರ್ ಶರ್ಮಾ ಅವರ ಅವಧಿ ಡಿಸೆಂಬರ್ 31 ಕ್ಕೆ ಪೂರ್ತಿಯಾಗುತ್ತದೆ. ರಾಜೀವ್ ಅವರು ಶರ್ಮಾ ಸ್ಥಾನವನ್ನು ತುಂಬಲಿದ್ದಾರೆ. ಜೈನ್ ರವರು 1980ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಪಿಎಸ್ ಅಧಿಕಾರಿ. ಜೈನ್ ರವರು 1989 ರಲ್ಲಿ ಗುಪ್ತಚರ ದಳದ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಅಂದಿನಿಂದ…
Read Moreರಾಜಸ್ತಾನ ಸರ್ಕಾರದಿಂದ ಅನ್ನಪೂರ್ಣ ರಸೊಯಿ ಯೋಜನೆ ತಮಿಳುನಾಡು ಸರ್ಕಾರದ ಮಾದರಿಯಲ್ಲೇ ರಾಜಸ್ತಾನ ಸರ್ಕಾರ ಅನ್ನಪೂರ್ಣ ರಸೊಯಿ ಯೋಜನೆಯನ್ನು ಜಾರಿಗೆ ತಂದಿದೆ. ಬಡವರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಪೂರೈಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ವಸುಂದರ ಬಜೆ ಅವರು ಈ ಯೋಜನೆಗೆ ಜೈಪುರ ಮುನಿಸಿಪಾಲ್ ಕಾರ್ಪೋರೇಶನ್ ಆವರಣದಲ್ಲಿ ಚಾಲನೆ ನೀಡಿದರು. “ಎಲ್ಲರಿಗೂ ಆಹಾರ ಮತ್ತು ಎಲ್ಲರಿಗೂ ಗೌರವ” ಇದು ಈ ಯೋಜನೆಯ ಧ್ಯೇಯವಾಕ್ಯ. ಯೋಜನೆಯ ವಿಶೇಷತೆಗಳು: ಈ ಯೋಜನೆಯಡಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಇದರಡಿ…
Read Moreಒಮನ್ ನ ಮಸ್ಕಟ್ ನಲ್ಲಿ ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ ಡಿಸೆಂಬರ್ 14-15 ರಂದು ಒಮನ್ ನ ಮಸ್ಕಟ್ ನಗರದಲ್ಲಿ ನಡೆಯಿತು. ‘Partnership towards innovation and cooperation in IT’ ಇದು ಈ ವರ್ಷದ ಸಮ್ಮೇಳನದ ಧ್ಯೇಯವಾಕ್ಯ. ಈ ಸಮ್ಮೇಳನವನ್ನು ಅರಬ್ ವಿದೇಶಾಂಗ ಸಚಿವಾಲಯ, ಅರಬ್ ಲೀಗ್ ಕಾರ್ಯಾಲಯ ಹಾಗೂ ಭಾರತ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರ ಸಚಿವಾಲಯ ಆಯೋಜಿಸಿದ್ದವು. ಪ್ರಮುಖಾಂಶಗಳು: ಎರಡು ಕಡೆಯಿಂದ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಆದ್ಯತಾ…
Read Moreಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳ ನಾಗರಿಕರಿಗೆ ವಿಸ್ತರಿಸಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ರವರು ರಾಜ್ಯಸಭೆಗೆ ಈ ವಿಷಯವನ್ನು ತಿಳಿಸಿದ್ದಾರೆ. ಇ-ಪ್ರವಾಸಿ ವೀಸಾ ಬಳಸಿ ಭಾರತಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಜನವರಿ ಮತ್ತು ನವೆಂಬರ್ ಅವಧಿಯಲ್ಲಿ 9,17,446 ರಷ್ಟಿದೆ. ಕಳೆದ ವರ್ಷ ಇದೇ ಅವಧಿಗಿಂತ 168.5% ಹೆಚ್ಚಳವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆ ಮೂಲಕ ಇ-ಪ್ರವಾಸಿ ವೀಸಾ ಅದ್ಭುತ…
Read Moreಭಾರತ-ಕಿರ್ಗಿಸ್ತಾನ್ ನಡುವಿನ ಕೃಷಿ ಸಹಕಾರ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ಸಹಕಾರ ಮೇಲಿನ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಉದ್ದೇಶಿತ ಒಪ್ಪಂದವು ಉಭಯ ದೇಶಗಳ ನಡುವೆ ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರಲಿದೆ. ಒಡಂಬಡಿಕೆಯ ಪ್ರಮುಖಾಂಶಗಳು: ಪ್ರಾಣಿ ತಳಿ ಅಭಿವೃದ್ದಿ, ಹಕ್ಕಿ ಜ್ವರ, ಕಾಲು ಮತ್ತು ಬಾಯಿ ರೋಗ ಮತ್ತು…
Read Moreಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕ್ಷೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರ ಇತ್ತೀಚೆಗೆ ಬಿಡುಗಡೆಗೊಂಡ 2016 ಐಎಚ್ಎಸ್ ಜೇನ್ಸ್ ರಕ್ಷಣಾ ಆಯವ್ಯಯ ವರದಿ ಪ್ರಕಾರ ಭಾರತವು ಪ್ರಪಂಚದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರವೆನಿಸಿದೆ. ಅಮೆರಿಕ ಮೂಲದ ಐಎಚ್ಎಸ್ ಜೇನ್ಸ್ ಹೊರತಂದಿರುವ ವರದಿಯಲ್ಲಿ ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಸೌಧಿ ಅರೇಬಿಯಾ ರಾಷ್ಟ್ರಗಳನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ. ವರದಿಯ ಪ್ರಮುಖಾಂಶಗಳು: ಅಮೆರಿಕ, ಚೀನಾ ಮತ್ತು ಯುಕೆ ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸುವ ವಿಶ್ವದ…
Read More