ಕರ್ನಾಟಕದ ಬೇಜ್ವಾಡ ವಿಲ್ಸನ್ ಮತ್ತು ಚೆನ್ನೈನ ಕೃಷ್ಣ ರವರಿಗೆ 2016 ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಮಾನವ ಹಕ್ಕು ಹೋರಾಟಗಾರ ಬೇಜ್ವಾಡ ವಿಲ್ಸನ್ ಹಾಗೂ ಪ್ರಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ರವರನ್ನು ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ-2016 ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಏಷ್ಯಾದ ನೊಬೆಲ್ ಎಂದೇ ಪ್ರಸಿದ್ದಿ ಹೊಂದಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಆರು ಜನರನ್ನು ಆಯ್ಕೆಮಾಡಲಾಗಿದ್ದು, ಭಾರತದಿಂದ ಈ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ: ಬೇಜ್ವಾಡ ವಿಲ್ಸನ್: ಮೂಲತಃ ಕರ್ನಾಟಕದ ಕೆಜಿಎಪ್ ನವರಾದ…
Read Moreದೇಶದ ಮೊದಲ “ಸ್ಟಾರ್ಟ್ ಅಪ್ ಸೆಲ್ (Start up Cell)” ರಾಜ್ಯದಲ್ಲಿ ಆರಂಭ ನವೋದ್ಯಮಗಳ ಪ್ರೋತ್ಸಾಹಿಸುವ ಸಲುವಾಗಿ ದೇಶದ ಮೊದಲ ಸ್ಟಾರ್ಟ್ ಅಪ್ ಸೆಲ್ ಅನ್ನು ಕರ್ನಾಟಕ ರಾಜ್ಯದಲ್ಲಿ ಆನಾವರಣಗೊಳಿಸಲಾಗಿದೆ. ನವೋದ್ಯಮವನ್ನು ಬಯಸುವವರಿಗೆ ನೋಂದಾಣಿ ಮತ್ತು ಸವಲತ್ತುಗಳ ವಿತರಣೆಗೆ ಸ್ಟಾರ್ಟ್ ಅಪ್ ಸೆಲ್ ಸಹಾಯ ಮಾಡಲಿದೆ. ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-20 ರ ಅಡಿ ನಮೋದ್ಯಮವನ್ನು ಬಲಪಡಿಸುವ ಉದ್ದೇಶದೊಂದಿಗೆ ಸ್ಟಾರ್ಟ್ ಅಪ್ ಸೆಲ್ ಅನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-20 ರ ನಮೋದ್ಯಮಗಳಿಗೆ…
Read Moreದೇಶದ ಮೊದಲ ಹಸಿರು ರೈಲು ಕಾರಿಡರ್ ಗೆ ತಮಿಳುನಾಡಿನಲ್ಲಿ ಚಾಲನೆ ದೇಶದ ಮೊದಲ ಹಸಿರು ರೈಲು ಮಾರ್ಗಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಲಾಯಿತು. ತಮಿಳುನಾಡಿನ ರಾಮೇಶ್ವರಂ-ಮನಮಧುರೈ ನಡುವಿನ 114 ಕಿ.ಮೀ ಅಂತರದ ಹಸಿರು ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರವರು ವಿಡಿಯೋ ಕಾನ್ಪರೆನ್ಸ್ ಮುಂಖಾತರ ಉದ್ಘಾಟಿಸಿದರು. ಈ ರೈಲು ಮಾರ್ಗದಲ್ಲಿ ಚಲಿಸುವ ರೈಲುಗಳ ಶೌಚಾಲಯದಿಂದ ಮಲ ಮೂತ್ರ ರೈಲು ಹಳಿಗಳ ಮೇಲೆ ಬೀಳದೆ ಸ್ವಚ್ಚತೆ ಕಾಪಾಡುವ ಸಲುವಾಗಿ ಹಸಿರು ಕಾರಿಡಾರ್ನ ಉದ್ದೇಶ. ಸ್ವಚ್ಛ ರೈಲು-ಸ್ವಚ್ಛ…
Read Moreಕೇರಳ ಪ್ರವಾಸೋದ್ಯಮಕ್ಕೆ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ಸ್ (PATA)ನ ಪ್ರಶಸ್ತಿ ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ ಕೇರಳ ಸರ್ಕಾರ ಕೈಗೊಂಡಿರುವ ಹಲವಾರು ಯೋಜನೆಗಳಿಗಾಗಿ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ಸ್ (PATA)ನ ಎರಡು ಚಿನ್ನದ ಪ್ರಶಸ್ತಿಯನ್ನು ನೀಡಲಾಗಿದೆ. ಕೇರಳ ಪ್ರವಾಸೋದ್ಯಮದ ಪ್ರವಾಸ ಜಾಹೀರಾತು ಪ್ರಸರಣ ಮಾಧ್ಯಮ ಮತ್ತು ಇ-ಸುದ್ದಿಪತ್ರ ವಿಭಾಗಕ್ಕೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಸೆಪ್ಟೆಂಬರ್ 9, 2016 ರಲ್ಲಿ ಇಂಡೋನೇಷ್ಯಾದ ಜಕರ್ತಾದಲ್ಲಿ ನಡೆಯಲಿರುವ PATA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರವಾಸ ಜಾಹೀರಾತು ಪ್ರಸರಣ ಮಾಧ್ಯಮ…
Read MoreUIDAI ನೂತನ ಸಿಇಓ ಆಗಿ ಅಜಯ್ ನಾಗಭೂಷಣ್ ನೇಮಕ ಹಿರಿಯ ಐಎಎಸ್ ಅಧಿಕಾರಿ ಅಜಯ್ ನಾಗಭೂಷಣ್ ರವರನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India)ದ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಇವರ ನೇಮಕಾತಿಯನ್ನು ಅನುಮೋದಿಸಿದೆ. ಅಜಯ್ ನಾಗಭೂಷಣ್ ರವರು 1984 ಬ್ಯಾಚ್ ನ ಮಹಾರಾಷ್ಟ್ರ ಕ್ಯಾಡ್ರೆಯ ಐಎಎಸ್ ಅಧಿಕಾರಿ. ಈ ಹಿಂದೆ ಇವರು ವಿಶಿಷ್ಟ ಗುರುತಿನ ಪ್ರಾಧಿಕಾರದ ನಿರ್ದೇಶಕರಾಗಿ ಸೇವೆ…
Read Moreಆಂಧ್ರಪ್ರದೇಶದಲ್ಲಿ ಹೊಸ NIT ಸ್ಥಾಪನೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ರಾಷ್ಟ್ರೀಯ ತಾಂತ್ರಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೈನ್ಸ್, ಎಜುಕೇಷನ್ ಮತ್ತು ರಿಸರ್ಚ್) (NITSER) ಮಸೂದೆ-2016 ತಿದ್ದುಪಡಿಗೆ ಗೆ ಲೋಕ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ. ಈ ಮಸೂದೆಯನ್ನು ಆಂಧ್ರಪ್ರದೇಶದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು NITSER ಕಾಯಿದೆ, 2007ರ ಅಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತ ಸಂಸ್ಥೆಯನ್ನಾಗಿ ಸ್ಥಾಪಿಸುವ ಉದ್ದೇಶದೊಂದಿಗೆ ತರಲಾಗಿದೆ. ಕೇಂದ್ರ ಸರ್ಕಾರ ಪ್ರಸ್ತಕ ಸಾಲಿನಲ್ಲಿ ರೂ 40 ಕೋಟಿಯನ್ನು ಈ…
Read Moreಬೇನಾಮಿ ವಹಿವಾಟು ತಡೆ ಮಸೂದೆ-2015 ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಬೇನಾಮಿ ವಹಿವಾಟು ತಡೆ ಮಸೂದೆ-2015 ತಿದ್ದುಪಡಿಗಳನ್ನು ತರುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಗಳ ಮೂಲಕ ಬೇನಾಮಿ ವಹಿವಾಟು ನಿಷೇಧ ಕಾಯಿದೆ-1988 ಅನ್ನು ಕಾನೂನು ಮತ್ತು ಆಡಳಿತಾತ್ಮಕವಾಗಿ ಬಲಪಡಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಮಸೂದೆಯು ಬೇನಾಮಿ ವಹಿವಾಟು ವ್ಯಾಖ್ಯಾನಕ್ಕೆ ತಿದ್ದುಪಡಿ ತರುವ ಮೂಲಕ ಕಾನೂನು ವ್ಯಾಪ್ತಿಯನ್ನು ವಿಸ್ತಾರಗೊಳಿಸಲಿದೆ. ಬೇನಾಮಿ ವಹಿವಾಟು ನಡೆಸುವವರಿಗೆ ನಿರ್ದಿಷ್ಟ ಶಿಕ್ಷೆಯನ್ನು ವಿಧಿಸುವ…
Read More“ರೋಹಿತ್ ಖಂಡೇಲ್ ವಾಲ್ “ ಮಿಸ್ಟರ್ ವರ್ಲ್ಡ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕಿರುತೆರೆ ನಟ, ರೂಪದರ್ಶಿ ಆಗಿರುವ ರೋಹಿತ್ ಖಂಡೇಲ್ ವಾಲ್ ರವರು ಪ್ರತಿಷ್ಠಿತ ಮಿಸ್ಟರ್ ವರ್ಲ್ಡ್ ಪಟ್ಟ ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರಶಸ್ತಿ ಪಡೆಯುವ ಮೂಲಕ ಇವರು ಈ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ಎನಿಸಿದ್ದಾರೆ. ಅಷ್ಟೇ ಅಲ್ಲ ಈ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಏಷ್ಯನ್ ಸಹ ಎನಿಸಿದ್ದಾರೆ. ಇಂಗ್ಲೆಂಡ್’ನ ಸೌಥ್’ಪೋರ್ಟ್ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 48 ದೇಶಗಳ…
Read Moreದೇಶದ ಮೊದಲ ಇ-ಕೋರ್ಟ್ ಹೈದ್ರಾಬಾದ್ ನಲ್ಲಿ ಉದ್ಘಾಟನೆ ದೇಶದ ಪ್ರಪ್ರಥಮ ಇ-ಕೋರ್ಟ್ ಗೆ ಹೈದ್ರಾಬಾದ್ ಹೈಕೋರ್ಟ್ನಲ್ಲಿ ಆರಂಭಿಸಲಾಗಿದೆ. ಹೈದ್ರಾಬಾದ್ ಹೈಕೋರ್ಟ್ ತೆಲಂಗಣ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳಿಗೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ಮೂಲಕ ಏಕೀಕೃತ ಅಪರಾಧ ನ್ಯಾಯವ್ಯವಸ್ಥೆ (ಐಸಿಜೆಎಸ್) ಜಾರಿಗೊಳಿಸಿದ ಮೊದಲ ನ್ಯಾಯಾಲಯ ಎಂಬ ಕೀರ್ತಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಪಾತ್ರವಾಗಿವೆ. ಈ ಕೋರ್ಟನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ಇ-ಕೋರ್ಟ್ ಸಮಿತಿಯ ಮುಖ್ಯಸ್ಥರೂ ಆದ ನ್ಯಾ.ಮದನ್ ಬಿ ಲೋಕ್ ರವರು ಉದ್ಘಾಟಿಸಿದರು. ಇ-ಕೋರ್ಟ್ ನಿಂದ ಪ್ರಕರಣಗಳ…
Read Moreಬಿಸಿಸಿಐ ಸಂಬಂಧಿಸಿದ ಲೋಧಾ ಸಮಿತಿ ಶಿಫಾರಸ್ಸುಎತ್ತಿಡಿದ ಸುಪ್ರೀಂ ಕೋರ್ಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿದ್ದ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳುವಂತೆ ಬಿಸಿಸಿಐ ಗೆ ಸೂಚಿಸಿದೆ. ಈ ಶಿಫಾರಸ್ಸುಗಳನ್ನು ಬಿಸಿಸಿಐಗೆ ಜಾರಿಗೆ ತರಲು ಆರು ತಿಂಗಳ ಕಾಲವಕಾಶ ನೀಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಲೋಧಾ ನೇತೃತ್ವದಲ್ಲಿ ಸಮಿತಿಯನ್ನು…
Read More