ಶಾಲೆಗಳಲ್ಲಿ ಬೆಂಗಾಳಿ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಖಾಸಗಿ ಶಾಲೆಗಳು, ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಬಂಗಾಳಿ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಇದಾದ ನಂತರ, ಪಶ್ಚಿಮ ಬಂಗಾಳದ ಸೆಕೆಂಡರಿ ಶಿಕ್ಷಣ ಮಂಡಳಿಗಳನ್ನು ಹೊರತುಪಡಿಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಬಂಗಾಳಿಯನ್ನು ಐಚ್ಛಿಕ ವಿಷಯವಾಗಿ ಬೋಧಿಸುವುದು ಕಡ್ಡಾಯ. ಆದ್ದರಿಂದ ವಿದ್ಯಾರ್ಥಿಗಳು ಬಂಗಾಳಿಯನ್ನು ಎರಡನೆಯ ಅಥವಾ ಮೂರನೇ ಭಾಷೆಯಾಗಿ ಅಧ್ಯಯನ ಮಾಡಬಹುದು. ಪ್ರಸ್ತುತ, ಶಾಲೆಗಳಲ್ಲಿ ಬಂಗಾಳಿ…
Read Moreಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದ ಅತ್ಯಂತ ಸ್ವಚ್ಚ ರೈಲ್ವೆ ನಿಲ್ದಾಣ ಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ತೆಲಂಗಾಣದ ಸಿಕಂದರಾಬಾದ್ ಜಂಕ್ಷನ್ ಮತ್ತು ಜಮ್ಮು ತವಿ ರೈಲ್ವೆ ನಿಲ್ದಾಣಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ. ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಬುಧವಾರ ಇಲ್ಲಿ ಬಿಡುಗಡೆ ಮಾಡಿದರು. ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಭಾರತೀಯ ಗುಣಮಟ್ಟ ನಿಯಂತ್ರಣ ವಿಭಾಗ ಈ…
Read Moreಪರಿಸರ ಸಚಿವ ಅನಿಲ್ ಮಾಧವ್ ದವೆ ನಿಧನ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆಯ ಸಚಿವ ಅನಿಲ್ ಮಾಧವ್ ದವೆ ಹೃದಯಾಘಾತದಿಂದ ನಿಧನರಾದರು. ಅನಿಲ್ ಮಾಧವ್ ದವೆ ಅವರು ಮಧ್ಯಪ್ರದೇಶದ ಬಾದ್ನಗರದಲ್ಲಿ ಜುಲೈ 6, 1956 ರಂದು ಜನಿಸಿದರು. ಅವರು ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದರು. 2009 ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ದವೆ ಆಯ್ಕೆಯಾದರು. ಕಳೆದ ವರ್ಷ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಖಾತೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ದವೆ ಅವರು ನರ್ಮದಾ…
Read MoreUNFCC ಉನ್ನತ ಹುದ್ದೆಗೆ ಓವೈಸ್ ಸರ್ಮದ್ ನೇಮಕ ಭಾರತದ ಓವೈಸ್ ಸರ್ಮದ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಅವರು ಯುನೈಟೆಡ್ ನೇಷನ್ಸ್ ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCC)ನ ಡೆಪ್ಯುಟಿ ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದಾರೆ. ಇದು UNFCC ನಲ್ಲಿ ಪ್ರಮುಖ ಸ್ಥಾನವಾಗಿದೆ. ದೆಹಲಿಯ ವಿಶ್ವಸಂಸ್ಥೆಯ ಮಾಹಿತಿ ಕೇಂದ್ರದ ಪ್ರಕಾರ, UNFCC ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಮಾಡಿದ ನಂತರ ನೇಮಕವನ್ನು ಮಾಡಲಾಗಿದೆ. UNFCC ಹವಾಮಾನ ಬದಲಾವಣೆಯನ್ನು ನಿಧಾನಗೊಳಿಸುವ ಉದ್ದೇಶವನ್ನು ಹೊಂದಿದೆ.…
Read Moreನಿರ್ಭಯ ನಿಧಿಯಡಿ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸಲು ತೀರ್ಮಾನ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ನಿರ್ಭಯ ನಿಧಿಯ ಅಡಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ 19,000 ಹೈ ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ದೇಶಾದ್ಯಂತ 983 ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲು ತೀರ್ಮಾನಿಸಿದೆ. ರೈಲ್ವೆ ಪ್ಲಾಟ್ ಫಾರಂ ಮತ್ತು ಪ್ರಯಾಣಿಕರು ಕಾಯುವ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ತರಬೇತಿ ಪಡೆದ ರೈಲ್ವೆ ಪೊಲೀಸ್ ಸಿಬ್ಬಂದಿಗಳು ಸಿ.ಸಿ.ಟಿ.ವಿ ದೃಶ್ಯಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರಲಿದ್ದಾರೆ. ಭಾರತೀಯ ರೈಲ್ವೆ…
Read Moreಚೀನಾದ ಓನ್ ಬೆಲ್ಟ್ ಓನ್ ರೋಡ್ ಶೃಂಗಸಭೆಗೆ ಭಾರತ ಗೈರು ಚೀನಾ ಆಯೋಜಿಸುತ್ತಿರುವ ಓನ್ ಬೆಲ್ಟ್ ಓನ್ ರೋಡ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿದೆ. ಬದಲಿಗೆ ತನ್ನದೇ ಆದ ವ್ಯಾಪಾರ ಮಾರ್ಗಗಳ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ. ಓನ್ ಬೆಲ್ಟ್ ಓನ್ ರೋಡ್ ಯೋಜನೆ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಏಷ್ಯಾ, ಆಫ್ರಿಕಾ, ಮಧ್ಯಪೂರ್ವ ಮತ್ತು ಐರೋಪ್ ಭಾಗಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಮತ್ತು ವ್ಯಾಪಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ 2013…
Read Moreಗಡಿ ಭದ್ರತೆಗೆ ಲೇಸರ್ ಗೋಡೆ ತಂತ್ರಜ್ಞಾನ ಬಳಸಲು ಬಿಎಸ್ಎಫ್ ನಿರ್ಧಾರ ಜಮ್ಮು ಮತ್ತು ಕಾಶ್ಮೀರದಲ್ಲಿ 198 ಕಿ.ಮೀ ಉದ್ದದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆ ಕಾಪಾಡಿಕೊಳ್ಳಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಗಡಿ ಭದ್ರತಾ ಪಡೆ ನಿರ್ಧರಿಸಿದಿ. ಹೊಸ ತಂತ್ರಜ್ಞಾನದಲ್ಲಿ ನುಸುಳುಕೋರರನ್ನು ಸುಲಭವಾಗಿ ಪತ್ತೆಹಚ್ಚಿ, ಶೀಘ್ರವಾಗಿ ಮಾಹಿತಿಯನ್ನು ರವಾನೆ ಮಾಡುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿರಲಿದೆ. ದೆಹಲಿ ಮೂಲದ ರಕ್ಷಣಾ ಐಒಟಿ CRON ಸಿಸ್ಟಮ್ಸ್ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದೆ. ಕವಚ್ (KVX) ಸರಣಿ ಲೇಸರ್ ಗೋಡೆಗಳೆಂದು ಕರೆಯಲಾಗುವ ಹೊಸ ತಂತ್ರಜ್ಞಾನವನ್ನು…
Read Moreನೆಪ್ಚೂನ್ ಗಾತ್ರದ ದೂರದ ಗ್ರಹದಲ್ಲಿ ನೀರಿನ ಕುರುಹು ಪತ್ತೆ ವಿಜ್ಞಾನಿಗಳು HAT-P-26b ಎಂಬ ದೂರದ ನೆಪ್ಚೂನ್-ಗಾತ್ರದ ಗ್ರಹದ ವಾತಾವರಣದಲ್ಲಿ “ಬಲವಾದ ನೀರಿನ ಕುರುಹು”ವನ್ನು ಪತ್ತೆ ಮಾಡಿದ್ದಾರೆ. NASAದ ಹಬಲ್ ಮತ್ತು ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕಗಳನ್ನು ಬಳಸಿ ನಡೆಸಿದ ಅಧ್ಯಯನದ ಪ್ರಕಾರ, HAT-P-26bಯು ಬಹುತೇಕ ಹೈಡ್ರೋಜನ್ ಮತ್ತು ಹೀಲಿಯಂಗಳನ್ನು ಒಳಗೊಂಡಿರುವ ವಾತಾವರಣವನ್ನು ಹೊಂದಿದೆ ಎಂದು ಹೇಳಲಾಗಿದೆ. ಗ್ರಹದ ವಾತಾವರಣವು ಮೋಡಗಳಿಂದ ಮುಕ್ತವಾಗಿದ್ದು ಬಲವಾದ ನೀರಿನ ಕುರುಹು ಹೊಂದಿದೆ. ಗ್ರಹದ ನಕ್ಷತ್ರದ ಮುಂದೆ ಹಾದುಹೋಗುವಾಗ ನಾಲ್ಕು ಟ್ರಾನ್ಸಿಸ್ಟರ್ ಗಳಿಂದ…
Read Moreಏರ್-ಟು-ಏರ್ ಬಿಯಾಂಡ್ ವಿಷುಯಲ್ ರೇಂಜ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದ ತೇಜಸ್ ತೇಜಸ್, ಲಘು ಯುದ್ದ ವಿಮಾನ ಯಶಸ್ವಿಯಾಗಿ ಡಾರ್ಬಿ ಏರ್-ಟು-ಏರ್ ಬಿಯಾಂಡ್ ವಿಷುಯಲ್ ರೇಂಜ್ (Air-to-Air Beyond Visual Range Missiles) ಕ್ಷಿಪಣಿಗಳನ್ನು ರಾಡಾರ್ ಮಾರ್ಗದರ್ಶಿ ವಿಧಾನದಲ್ಲಿ ಯಶಸ್ವಿಯಾಗಿ ಉಡಾಯಿಸಿದೆ. ಈ ಪರೀಕ್ಷೆಯನ್ನು ಚಂಡಿಪುರದ ಇಂಟರಿಂ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿರುವ ಮನಯೋವರೇಬಲ್ ಏರಿಯಲ್ ಟಾರ್ಗೆಟ್ನಲ್ಲಿ ನಡೆಸಲಾಯಿತು. ಏರ್ ಕ್ರಾಫ್ಟ್ ಏವಿಯನಿಕ್ಸ್, ಫೈರ್ ಕಂಟ್ರೋಲ್ ರಾಡಾರ್, ಲಾಂಚರ್ಸ್ ಮತ್ತು ಮಿಸೈಲ್ ವೆಪನ್ ಡೆಲಿವರಿ ಸಿಸ್ಟಮ್ ಅನ್ನು ತೇಜಸ್…
Read Moreಮೇ 11: ರಾಷ್ಟ್ರೀಯ ತಂತ್ರಜ್ಞಾನ ದಿನ ಭಾರತದ ತಾಂತ್ರಿಕ ಅಭಿವೃದ್ಧಿಯನ್ನು ಗುರುತಿಸಲು ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 2017ರ ರಾಷ್ಟ್ರೀಯ ತಂತ್ರಜ್ಞಾನ ದಿನ ಧ್ಯೇಯ ವಾಕ್ಯ: ‘ತಂತ್ರಜ್ಞಾನಕ್ಕಾಗಿ ಅಂತರ್ಗತ ಮತ್ತು ಸಮರ್ಥನೀಯ ಬೆಳವಣಿಗೆ’. ವಿಶೇಷತೆ: ಆಪರೇಷನ್ ಶಕ್ತಿ (ಪೊಖ್ರಾನ್-2) ಪರಮಾಣು ಪರೀಕ್ಷೆಯ ಐದು ಪರೀಕ್ಷೆಗಳಲ್ಲಿ ಮೊದಲನೆಯ ಪರೀಕ್ಷೆಯನ್ನು ರಾಜಸ್ಥಾನದ ಪೊಖ್ರಾನ್ನಲ್ಲಿ 11 ಮೇ 1998 ರಂದು ನಡೆಸಲಾಯಿತು. ಇದರ ಸ್ಮರಣಾರ್ಥ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವೆಂದು ಆಚರಿಸಲಾಗುತ್ತಿದೆ. ಈ…
Read More